ಮಂಗಳೂರು: ರೌಡಿ ಸಂದೀಪ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಮಂಗಳೂರು ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಕುಖ್ಯಾತ ರೌಡಿ ಬನ್ನಂಜೇ ರಾಜನ ಸಹಚರನಾಗಿದ್ದ ರೌಡಿ ಸಂದೀಪ್ ಶೆಟ್ಟಿಯನ್ನು ಕೇಶವ ಯಾನೆ ಚೋನಿ, ಪ್ರಿತೇಶ್, ಅವಿನಾಶ್ ಎಂಬವರು 2011 ರ ನವಂಬರ್ 13 ನೇ ರಾತ್ರಿ ಸೋಮೇಶ್ವರದ ಸಂದೀಪನ ಮನೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಉಲ್ಲಾಳ ಪೊಲೀಸರು ಚೋನಿ, ಪ್ರಿತೇಶ್, ಅವಿನಾಶ್ ಬಂಧಿಸಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಮಂಗಳೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇಂದು ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.