ಟೋಪಿ, ಕಂಬಳಿ, ದಿಂಬು ಹಿಡಿದು ವಿಭಿನ್ನ ವೇಷದೊಂದಿಗೆ ಕೌನ್ಸಿಲ್ ಸಭೆಗೆ ಆಗಮಿಸಿದ ಬಿಜೆಪಿ ಸದಸ್ಯರು ತೆರಿಗೆ ಏರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಮೇಯರ್ ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಸದಸ್ಯರೂ ಕೆಲಕಾಲ ಗರಂ ಆದರು. ಪರಿಣಾಮ ಸಭೆ ಆವರಣದಲ್ಲಿಯೇ ಗದ್ದಲದ ಜತೆ ಜೊತೆಗೇ ನೂಕಾಟ, ತಳ್ಳಾಟವೂ ನಡೆಯಿತು. ಕೋಪಗೊಂಡ ಮೇಯರ್ ಮಂಜುನಾಥ್ ಗದ್ದಲ ಮಾಡುತ್ತಿದ್ದಾರೆನ್ನುವ ಕಾರಣಕ್ಕೆ ವಿಪಕ್ಷ ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ಸೇರಿದಂತೆ ನಾಲ್ವರು ಬಿಜೆಪಿ ಸದಸ್ಯರನ್ನು ಅಮಾನತು ಗೊಳಿಸಿದ್ದಾರೆ.