ಗರ್ಭಪಾತ ಮಾತ್ರೆ ಬದಲಿಗೆ ವಿಷದ ಮಾತ್ರೆ ನೀಡಿ ಪ್ರಿಯತಮೆ ಹತ್ಯೆ

ಪ್ರೀತಿ ಹೆಸರಲ್ಲಿ 19ರ ಹರೆಯದ ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿ, ಯುವತಿ ಗರ್ಭಿಣಿಯಾಗುತ್ತಿದ್ದಂತೆ ಆಕೆಗೆ ಗರ್ಭಪಾತ ಮಾತ್ರೆ ಬದಲಿಗೆ ವಿಷದ ಮಾತ್ರೆ ನೀಡಿ...
ಹತ್ಯೆ
ಹತ್ಯೆ

ಗೌರಿಬಿದನೂರು: ಪ್ರೀತಿ ಹೆಸರಲ್ಲಿ 19ರ ಹರೆಯದ ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿ, ಯುವತಿ  ಗರ್ಭಿಣಿಯಾಗುತ್ತಿದ್ದಂತೆ ಆಕೆಗೆ ಗರ್ಭಪಾತ ಮಾತ್ರೆ ಬದಲಿಗೆ ವಿಷದ ಮಾತ್ರೆ ನೀಡಿ ಕೊಲೆ ಮಾಡಿರುವ ಘಟನೆ ನಡೆದಿದೆ.

ನರೇಶ್ ಎಂಬಾತ ಪ್ರಿಯತಮೆ 19 ವರ್ಷದ ಗೀತಾಳನ್ನು ಕಳೆದ ಆರು ತಿಂಗಳಿನಿಂದ ಪ್ರೀತಿಸುತ್ತಿದ್ದ, ಜತೆಗೆ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳಸಿದ್ದು ಆಕೆ ಗರ್ಭದರಿಸಿದ್ದಾಳೆ. ಇದರಿಂದ ಗಾಬರಿಗೊಂಡ ನರೇಶ್ ಆಕೆಗೆ ಗರ್ಭಪಾತ ಮಾತ್ರೆಗೆ ಬದಲಿಗೆ ವಿಷದ ಮಾತ್ರೆ ನೀಡಿದ್ದಾನೆ. ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥಳಾಗಿದ್ದ ಗೀತಾಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.

ಗೀತಾಳ ಸಾವಿಗೆ ನರೇಶ್ ಕಾರಣ ಎಂದು ಪೋಷಕರು ಆರೋಪಿಸಿ ಆತನ ಮನೆ ಎದುರು ಶವವಿಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗೌರಿ ಬಿದನೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com