ಚುಡಾಯಿಸಿದ ಆರೋಪ; ಬೆಂಗಳೂರಿನ ನಾಲ್ವರು ಅಪ್ರಾಪ್ತರ ಬಂಧನ

ಮಹಿಳೆಯನ್ನು ಚುಡಾಯಿಸುತ್ತಿದ್ದ ನಾಲ್ಕು ಅಪ್ರಾಪ್ತ ಬಾಲಕರನ್ನು ವಿಜಯನಗರದ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇವರನ್ನು ಬಾಲಾಪರಾಧಿ ಕೇಂದ್ರದ ವಶಕ್ಕೆ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಿಳೆಯನ್ನು ಚುಡಾಯಿಸುತ್ತಿದ್ದ ನಾಲ್ಕು ಅಪ್ರಾಪ್ತ ಬಾಲಕರನ್ನು ವಿಜಯನಗರದ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇವರನ್ನು ಬಾಲಾಪರಾಧಿ ಕೇಂದ್ರದ ವಶಕ್ಕೆ ನೀಡಲಾಗಿದೆ. ಇವರೆಲ್ಲರೂ ಶಾಲೆ ಓದನ್ನು ನಿಲ್ಲಿಸಿರುವವರು ಎಂದು ತಿಳಿದುಬಂದಿದೆ.

ಈ ಘಟನೆ ಎರಡು ವಾರಗಳ ಹಿಂದೆ ನಡೆದದ್ದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಮನುವನದ ಬಸ್ ನಿಲ್ದಾಣದ ಬಳಿ ಮೈಸೂರು ಮೂಲದ ಮಹಿಳೆ ಅನುರಾಧಾ (ಹೆಸರು ಬದಲಿಸಲಾಗಿದೆ) ಬಸ್ ಗಾಗಿ ಕಾಯುವಾಗ, ನಿಲ್ದಾಣದ ಬಳಿ ನಿಂತಿರುತ್ತಿದ್ದ ಈ ನಾಲ್ಕು ಜನರ ಗುಂಪು ಅವರನ್ನು ದಿಟ್ಟಿಸುತ್ತಾ ಚುಡಾಯಿಸುತ್ತಿದ್ದರು. ಮಹಿಳೆ ಬಾಲಕರಿಗೆ ಒಂದೆರಡು ಬಾರಿ ಎಚ್ಚರಿಕೆ ನೀಡಿದ್ದರೂ, ಅವರು ಚುಡಾಯಿಸುವುದನ್ನು ಮುಂದುವರೆಸಿದ್ದಾರೆ.

ಆಗ ಅನುರಾಧಾ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com