ಚುಡಾಯಿಸಿದ ಆರೋಪ; ಬೆಂಗಳೂರಿನ ನಾಲ್ವರು ಅಪ್ರಾಪ್ತರ ಬಂಧನ

ಮಹಿಳೆಯನ್ನು ಚುಡಾಯಿಸುತ್ತಿದ್ದ ನಾಲ್ಕು ಅಪ್ರಾಪ್ತ ಬಾಲಕರನ್ನು ವಿಜಯನಗರದ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇವರನ್ನು ಬಾಲಾಪರಾಧಿ ಕೇಂದ್ರದ ವಶಕ್ಕೆ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಹಿಳೆಯನ್ನು ಚುಡಾಯಿಸುತ್ತಿದ್ದ ನಾಲ್ಕು ಅಪ್ರಾಪ್ತ ಬಾಲಕರನ್ನು ವಿಜಯನಗರದ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇವರನ್ನು ಬಾಲಾಪರಾಧಿ ಕೇಂದ್ರದ ವಶಕ್ಕೆ ನೀಡಲಾಗಿದೆ. ಇವರೆಲ್ಲರೂ ಶಾಲೆ ಓದನ್ನು ನಿಲ್ಲಿಸಿರುವವರು ಎಂದು ತಿಳಿದುಬಂದಿದೆ.

ಈ ಘಟನೆ ಎರಡು ವಾರಗಳ ಹಿಂದೆ ನಡೆದದ್ದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಮನುವನದ ಬಸ್ ನಿಲ್ದಾಣದ ಬಳಿ ಮೈಸೂರು ಮೂಲದ ಮಹಿಳೆ ಅನುರಾಧಾ (ಹೆಸರು ಬದಲಿಸಲಾಗಿದೆ) ಬಸ್ ಗಾಗಿ ಕಾಯುವಾಗ, ನಿಲ್ದಾಣದ ಬಳಿ ನಿಂತಿರುತ್ತಿದ್ದ ಈ ನಾಲ್ಕು ಜನರ ಗುಂಪು ಅವರನ್ನು ದಿಟ್ಟಿಸುತ್ತಾ ಚುಡಾಯಿಸುತ್ತಿದ್ದರು. ಮಹಿಳೆ ಬಾಲಕರಿಗೆ ಒಂದೆರಡು ಬಾರಿ ಎಚ್ಚರಿಕೆ ನೀಡಿದ್ದರೂ, ಅವರು ಚುಡಾಯಿಸುವುದನ್ನು ಮುಂದುವರೆಸಿದ್ದಾರೆ.

ಆಗ ಅನುರಾಧಾ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com