ಅನೇಕಲ್: ಈಜಲು ತೆರಳಿದ್ದ 3 ಬಾಲಕರು ನೀರು ಪಾಲು

ಅನೇಕಲ್ ತಾಲೂಕಿನ ಹೆಣ್ಣಾಗರ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಬಾಲಕರ ಪೈಕಿ ಮೂವರು ನೀರು ಪಾಲಾಗಿದ್ದಾರೆ...
ನೀರು ಪಾಲು
ನೀರು ಪಾಲು
Updated on
ಅನೇಕಲ್: ಅನೇಕಲ್ ತಾಲೂಕಿನ ಹೆಣ್ಣಾಗರ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಬಾಲಕರ ಪೈಕಿ ಮೂವರು ನೀರು ಪಾಲಾಗಿದ್ದಾರೆ. 
ನೀರು ಪಾಲಾದ ಬಾಲಕರನ್ನು ಅನೇಕಲ್ ತಾಲೂಕಿನ ರಾಜಾಪುರ ಗ್ರಾಮದ ಗಣೇಶ್(12), ಚೇತನ್(12) ಹಾಗೂ ರಾಕೇಶ್(13) ಎಂದು ಗುರುತಿಸಲಾಗಿದೆ. ಇನ್ನು ಬಾಲಕರು ಕೆರೆಯಲ್ಲಿ ಮುಳುಗಿದ್ದರಿಂದ ಹೆದರಿದ ಮತ್ತೋರ್ವ ಬಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಮೃತ ಬಾಲಕ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. 
ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com