ಮಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವ ಸಂಬಂಧ ಬಂಟ್ವಾಳ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಬಿ ಸಿ ರಸ್ತೆಯ ಜಬ್ಬಾರ್ ಎಂಬಾತ ಈ ಪೋಸ್ಟ್ ಹಾಕಿದ್ದು, ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ಹಿಂದೂಗಳನ್ನು ಪ್ರಚೋದಿಸುವ ರೀತಿಯ ಪೋಸ್ಟ್ ಗಳಿದ್ದು. ಐಪಿಸಿ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಟೀಲು ದುರ್ಗಾ ಪರಮೇಶ್ವರಿ ಬಗ್ಗೆ ಆರೋಪಿ ಅಶ್ಲೀಲ ಭಾಷೆ ಬಳಸಿದ್ದು, ಉಲ್ಲಾಳದ ಕರಾವಳಿ ಸಾಂಸ್ಕೃತಿಕ ಪರಿಷತ್ ಈ ಸಂಬಂಧ ಪೊಲೀಸರಿಗೆ ಮನವಿ ಸಲ್ಲಿಸಿದೆ.
ಇದುವರೆಗೂ ಆರೋಪಿಯವನ್ನು ಬಂಧಿಸಿಲ್ಲ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಅವಹೇಳನಕಾರಿ ಪೋಸ್ಟ್ ಹಾಕಿರುವ ಅರೋಪಿಯನ್ನು ಬಂಧಿಸಬೇಕೆಂದು ಕರಾವಳಿ ಸಾಂಸ್ಕೃತಿಕ ಪರಿಷತ್ ಪೊಲೀಸರನ್ನು ಒತ್ತಾಯಿಸಿದೆ.
Advertisement