ಚಿತ್ರದುರ್ಗ: 2ಸಾವಿರ ರು ಮುಖ ಬೆಲೆಯ ನೋಟುಗಳ ಸುಮಾರು 37 ಲಕ್ಷ ರು ಹಣವನ್ನು ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಮಕೃಷ್ಣ ಎಂಬಾತ ಹಣದೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಇನ್ಸ್ ಪೆಕ್ಟರ್ ಸಮೀವುಲ್ಲಾ, ಮತ್ತು ಪಿಎಸ್ ಐ ಸತೀಶ್ ನಾಯಕ್ ಆರೋಪಿಯನ್ನು ಬಂಧಿಸಿದ್ದಾರೆ.
500 ಹಾಗೂ ಸಾವಿರ ರು ನೋಟುಗಳ ನಿಷೇಧದ ನಂತರ ಹಣ ಬದಲಾವಣೆ ದಂಧೆಯಲ್ಲಿ ರಾಮಕೃಷ್ಣ ಭಾಗಿಯಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ಮೂಲದ ವ್ಯಾಪಾರಿಗಳ ಜೊತೆ ಆರೋಪಿ ನಂಟು ಹೊಂದಿದ್ದು, ಹಣ ಬದಲಾವಣೆ ಆಮೀಷ ತೋರಿಸಿದ್ದಾನೆ ಎಂದು ಸಂತೋಷ ಕುಮಾರ್ ಎಂಬ ವ್ಯಾಪಾರಿಯೊಬ್ಬರು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಳ್ಳಕೆರೆ ಪೊಲೀಸರು ಪ್ರಕರರಣ ದಾಖಲಿಸಿದ್ದಾರೆ.
Advertisement