ಚಕ್ಕರೆಯಲ್ಲಿ ಸಣ್ಣ ಜಮೀನು ಹೊಂದಿರುವ ರಾಮಣ್ಣ ಎಂಬ ಕೂಲಿ ಕಾರ್ಮಿಕ ಹೇಳುವ ಪ್ರಕಾರ, ಅವರಿಗೆ ಯಾವುದೇ ಸಮಸ್ಯೆಯುಂಟಾಗಬಹುದು ಎಂದು ಭಾವಿಸಿರಲಿಲ್ಲವಂತೆ. ಹಳೆ ನೋಟುಗಳನ್ನು ತೆಗೆದುಕೊಂಡು ಹೊಸ ನೋಟು ಕೊಡುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ನೋಟುಗಳ ನಿಷೇಧದ ನಂತರ ಕಾರ್ಮಿಕರಿಗೆ ನೀಡಲು ನಮ್ಮ ಬಳಿ ದುಡ್ಡು ಇಲ್ಲ, ಮತ್ತು ತಮ್ಮಲ್ಲಿ ದುಡ್ಡಿಲ್ಲದೆ ಯಾರೂ ನಮ್ಮನ್ನು ಕೆಲಸಕ್ಕೆ ಬರಲು ಹೇಳುವುದಿಲ್ಲ ಎನ್ನುತ್ತಾರೆ.