ಬೆಳೆ ನಾಶ: ಹೊಲದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆ

63 ವರ್ಷದ ರೈತ ಮಹಿಳೆಯೊಬ್ಬರು ಬೆಳೆ ನಾಶದಿಂದ ನೊಂದು ತನ್ನ ಹೊಲದಲ್ಲೇ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಹುಬ್ಬಳ್ಳಿ: 63 ವರ್ಷದ ರೈತ ಮಹಿಳೆಯೊಬ್ಬರು ಬೆಳೆ ನಾಶದಿಂದ ನೊಂದು ತನ್ನ ಹೊಲದಲ್ಲೇ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಶುಕ್ರವಾರ ಸಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಯಲ್ಲಮ್ಮ ಹೊನಕೇರಿ ಎಂದು ಗುರುತಿಸಲಾಗಿದ್ದು, ಮುಂಗಾರು ಮಳೆ ವೈಫಲ್ಯದಿಂದಾಗಿ ತನ್ನ 10 ಎಕರೆ ಬೆಳೆ ನಾಶವಾಗಿತ್ತು. ಇದರಿಂದ ತೀವ್ರವಾಗಿ ನೊಂದಿದ್ದ ಮಹಿಳೆ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳೆ ನಾಶದ ಹೊರತಾಗಿ ಯಲ್ಲಮ್ಮಗೆ ಬೇರೆ ಯಾವುದೇ ಸಮಸ್ಯೆ ಅಥವಾ ಸಾಲ ಇರಲಿಲ್ಲ ಎನ್ನಲಾಗಿದೆ.
ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯಲ್ಲಮ್ಮನ ಕುಂಟುಂಬ ಸದಸ್ಯರನ್ನು ಮತ್ತು ಗ್ರಾಮಸ್ಥರ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com