ಬಾಯಾರಿತೆಂದು ಮೃತ ಸಾಕ್ಷಪ್ಪನ ಇಬ್ಬರು ಮಕ್ಕಳು ಹತ್ತಿರದ ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋಗಿದ್ದರು. ಈ ವೇಳೆ ಮಕ್ಕಳು ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ. ನೀರು ಜಾಸ್ತಿ ಇದ್ದ ಪರಿಣಾಮ ಈಜಾಡಲು ಸಾಧ್ಯವಾಗದೆ ಪರದಾಡುತ್ತಿದ್ದ ಮಕ್ಕಳನ್ನು ರಕ್ಷಿಸಲೆಂದು ಸಾಕ್ಷಪ್ಪ ತಾವೂ ನೀರಿಗಿಳಿದ್ದಾರೆ. ಪರಿಣಾಮ ಮೂವರೂ ಮೃತಪಟ್ಟಿದ್ದಾರೆ.