ಡಿಸಿ ಬೆದರಿಕೆ ಪ್ರಕರಣ: ಜಿಲ್ಲಾಧಿಕಾರಿ ವಾಹನ ಚಾಲಕ, ಗನ್ ಮ್ಯಾನ್ ಹೇಳಿಕೆ ದಾಖಲು

ಮುಖ್ಯಮಂತ್ರಿ ಆಪ್ತ ಗೆಳೆಯ ಮರೀಗೌಡ ಅವರು ಮೈಸೂರು ಜಿಲ್ಲಾಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಜಾರ್ ಬಾದ್ ಪೊಲೀಸರು ಶಿಖಾ ಅವರ ವಾಹನ ಚಾಲಕ ಹಾಗೂ...
ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ
ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ
Updated on

ಮೈಸೂರು: ಮುಖ್ಯಮಂತ್ರಿ ಆಪ್ತ ಗೆಳೆಯ ಮರೀಗೌಡ ಅವರು ಮೈಸೂರು ಜಿಲ್ಲಾಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಜಾರ್ ಬಾದ್ ಪೊಲೀಸರು ಶಿಖಾ ಅವರ ವಾಹನ ಚಾಲಕ ಹಾಗೂ ಗನ್ ಮ್ಯಾನ್ ಹೇಳಿಕೆಯನ್ನು ದಾಖಲು ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಜಿಲ್ಲಾಧಿಕಾರಿ ಪ್ರಕರಣವನ್ನು ನಜಾರ್ ಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದು, ಇದರಂತೆ ತನಿಖೆ ಕೈಗೊಂಡಿರುವ ಎಸಿಬಿ ಬಿ.ಎಸ್. ರಾಜಶೇಖರ್ ಅವರು. ಶಿಖಾ ಅವರ ಗನ್ ಮ್ಯಾನ್ ಆಗಿರುವ ತಂಗವೇಲು ಹಾಗೂ ಕಾರು ಚಾಲಕನ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಮರೀಗೌಡ ಅವರು ಜಿಲ್ಲಾಧಿಕಾರಿ ಶಿಖಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣ ಇದೀಗ ವಿಧಾನಮಂಡಲದಲ್ಲೂ ಸದ್ದು ಮಾಡುತ್ತಿದ್ದು, ವಿರೋಧ ಪಕ್ಷಗಳು ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿವೆ. ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರೂ ಕೂಡ ಪ್ರತಿಭಟನೆ ನಡೆಸುತ್ತಿದ್ದು, ಮರೀಗೌಡ ಅವರ ಬಂಧನದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತಿವೆ.

ಈ ಮಧ್ಯೆಯೇ ಮರೀಗೌಡ ಅವರನ್ನು ಬಂಧನಕ್ಕೊಳಪಡಿಸದಂತೆ ನಗರ ಪೊಲೀಸರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com