ನಿಮ್ಮ ಅನುಮತಿಯಿಲ್ಲದೇ ಹೇಗೆ ಸಂದರ್ಶನ ನೀಡಿದರು: ಡಿಜಿಪಿ ವಿರುದ್ಧ ಸಿಎಂ ಕೆಂಡಾಮಂಡಲ

ಮಂಗಳೂರು ಡಿವೈಎಸ್‌ಪಿ ಗಣಪತಿ ಆತ್ಯಹತ್ಯೆಗೂ ಮುನ್ನ ಖಾಸಗಿ ಚಾನೆಲ್ ಗಳಿಗೆ ಸಂದರ್ಶನ ನೀಡಿರುವ ಸಂಬಂಧ ಸಿಎಂ ಸಿದ್ದರಾಮಯ್ಯ ಪೊಲೀಸ್ ಮಹಾ ನಿರ್ದೇಶಕ..
ಡಿಜಿಪಿ ಓಂ ಪ್ರಕಾಶ್ ರಾವ್ ಮತ್ತು ಸಿಎಂ ಸಿದ್ದರಾಮಯ್ಯ
ಡಿಜಿಪಿ ಓಂ ಪ್ರಕಾಶ್ ರಾವ್ ಮತ್ತು ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಮಂಗಳೂರು ಡಿವೈಎಸ್‌ಪಿ ಗಣಪತಿ ಆತ್ಯಹತ್ಯೆಗೂ ಮುನ್ನ ಖಾಸಗಿ ಚಾನೆಲ್ ಗಳಿಗೆ ಸಂದರ್ಶನ ನೀಡಿರುವ ಸಂಬಂಧ ಸಿಎಂ ಸಿದ್ದರಾಮಯ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಗಣಪತಿ ಅವರ ಆತ್ಮಹತ್ಯೆ ಸಂಬಂಧ ವಿವರಣೆ ನೀಡಲು ಸಿಎಂ ನಿವಾಸ ಕಾವೇರಿಗೆ ಓಂ ಪ್ರಕಾಶ್ ಆಗಮಿಸಿದ್ದರು. ಈ ವೇಳೆ ಡಿಜಿಪಿ ವಿರುದ್ಧ ಹರಿಹಾಯ್ದ ಸಿಎಂ ಗೃಹ ಸಚಿವ ಪರಮೇಶ್ವರ್ ವಿರುದ್ಧ ಹಿಗ್ಗಾಮುಗ್ಗ ಬೈಯ್ದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಡಿವೈಎಸ್‌ಪಿ ಗಣಪತಿಯವರು ಆತ್ಮಹತ್ಯೆಗೂ ಮುನ್ನ ಖಾಸಗಿ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಬಗ್ಗೆ ನಿಮಗೆ ಮಾಹಿತಿ ಇರಲಿಲ್ಲವೇ? ಇಷ್ಟಕ್ಕೂ ಅವರು ನಿಮ್ಮ ಅನುಮತಿ ಇಲ್ಲದೆ ಸಂದರ್ಶನ ನೀಡಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಗಣಪತಿಯವರ ಮನಸ್ಥಿತಿ ತಿಳಿದುಕೊಳ್ಳಲು ನಿಮ್ಮಿಂದ ಸಾಧ್ಯವಾಗಲಿಲ್ಲವೇ? ಅವರ ಮನಸ್ಥಿತಿ ಅರಿಯುವ ಸಾಮರ್ಥ್ಯ ನಿಮಗಿಲ್ಲವೇ ಎಂದ ಮುಖ್ಯಮಂತ್ರಿಗಳು, ಅಧಿಕಾರಿಗಳ ವರ್ತನೆ ಮೇಲೆ ನಿಗಾ ಇರಿಸಬೇಕು. ಅವರ ಮನಸ್ಥಿತಿ ಅರಿತು ತತ್‌ಕ್ಷಣವೇ ಸಮಸ್ಯೆ ಪರಿಹಾರಿಸಲು ಮುಂದಾಗಬೇಕಿತ್ತು ಎಂದು ಗುಡುಗಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com