ಬೆಂಗಳೂರು: ಸಾಮಾಜಿಕ ತಾಣ ಟ್ವಿಟ್ಟರ್ ಮೂಲಕ ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಜೊತೆ ಪ್ರಯಾಣಿಕರು ತಮ್ಮ ದೂರು, ದುಮ್ಮಾನಗಳನ್ನು, ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಹೀಗೊಬ್ಬ ಪ್ರಯಾಣಿಕ, ಮೀಸಲು ಬೋಗಿಯಲ್ಲಿ ಸಾಮಾನ್ಯ ಬೋಗಿಯ ಪ್ರಯಾಣಿಕರು ಹೋಗಿ ಹತ್ತಿಕೊಳ್ಳುತ್ತಾರೆ ಎಂದು ನಿನ್ನೆ (ಭಾನುವಾರ) ಸಚಿವ ಸುರೇಶ್ ಪ್ರಭು ಅವರಿಗೆ ಟ್ವಿಟ್ಟರ್ ನಲ್ಲಿ ದೂರು ನೀಡಿದ್ದರಂತೆ. ಗಣೇಶ್ ಶಿವರಾಮ್ ಎಂಬ ಪ್ರಯಾಣಿಕ ರೈಲ್ವೆ ಸಚಿವಾಲಯ ಮತ್ತು ಸುರೇಶ್ ಪ್ರಭು ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ನಿನ್ನೆ ಸಾಯಂಕಾಲ 4 ಗಂಟೆ ಸುಮಾರಿಗೆ ಪೋಸ್ಟ್ ಮಾಡಿದ್ದರಂತೆ. ಗೋಲ್ ಗುಂಬಜ್ ನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು ತುಂಬಾ ಕೆಟ್ಟ ಅನುಭವವಾಗುತ್ತಿದೆ ಎಂದು ಹೇಳಿಕೊಂಡಿದ್ದರಂತೆ.