ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಕ್ಕೆ ಅತೃಪ್ತಿಗೊಂಡಿರುವ ಬೆಂಗಳೂರಿನ 8 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ತೀರ್ಮಾನಿಸಿದ್ದಾರೆ.
ಶಾಸಕ ಸ್ಥಾನ ಸಿಗದಕ್ಕೆ ಅತೃಪ್ತಿಗೊಂಡಿರುವ ಬೆಂಗಳೂರು ಶಾಸಕರಾದ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್, ಕೃಷ್ಣರಾಜಪುರ ಶಾಸಕ ಭೈರತಿ ಬಸವರಾಜ್, ರಾಜರಾಜೇಶ್ವರಿನಗರ ಶಾಸಕ ಮುನಿರತ್ನ, ಆರ್.ವಿ ದೇವರಾಜ್, ಎಂ ಕೃಷ್ಣಪ್ಪ, ಪ್ರಿಯಾಕೃಷ್ಣ, ಸೇರಿ 8 ಶಾಸಕರು ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ನಲ್ಲಿ ಸದ್ಯ ಅಸಮಾಧಾನದ ಹೊಗೆಯಾಡುತ್ತಿದ್ದು, ಅತೃಪ್ತ ಶಾಸಕರ ಮನವೊಲಿಸುವ ಕೆಲಸ ಸಿದ್ದರಾಮಯ್ಯನವರ ಮೇಲಿದೆ.
Advertisement