ಸಿಂಧಿ ಶಾಲೆ
ರಾಜ್ಯ
ನಾಳೆ ಸಿಂಧಿ ಶಾಲಾ ವಿದ್ಯಾರ್ಥಿಗಳಿಂದ ಅಂಗಾಂಗ-ನೇತ್ರದಾನಕ್ಕಾಗಿ ಜನಜಾಗೃತಿ ಪಾದಯಾತ್ರೆ
ಕಿಡ್ನಿ ಮತ್ತು ನೇತ್ರದಾನ ಕುರಿತಂತೆ ಜನಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸಿಂಧಿ ಹೈಸ್ಕೂಲ್ ಶಾಲೆಯ 2000 ವಿದ್ಯಾರ್ಥಿಗಳು ಪಾದಯಾತ್ರೆ ಕೈಗೊಂಡಿದ್ದಾರೆ...
ಬೆಂಗಳೂರು: ಅಂಗಾಂಗ ಮತ್ತು ನೇತ್ರದಾನ ಕುರಿತಂತೆ ಜನಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸಿಂಧಿ ಹೈಸ್ಕೂಲ್ ಶಾಲೆಯ 2000 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ.
ಜನಜಾಗೃತಿ ಪಾದಯಾತ್ರೆಗೆ ಉಪ ಪೊಲೀಸ್ ಜಿಲ್ಲಾಧಿಕಾರಿ ಸಂದೀಪ್ ಪಾಟೀಲ್ ಅವರು ಚಾಲನೆ ನೀಡಲಿದ್ದಾರೆ. ಈ ಪಾದಯಾತ್ರೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದು ಭಾಗವಹಿಸಬೇಕು ಎಂದು ಸಿಂಧಿ ಸೇವಾ ಸಮಿತಿ ಮನವಿ ಮಾಡಿದೆ.
ಸಿಂಧಿ ಸೇವಾ ಸಮಿತಿಯ ಡೈಮೆಂಡ್ ಜ್ಯೂಬಿಲಿ ಸಂಭ್ರಮಾಚರಣೆ ಹಿನ್ನೆಲೆ ಜೂನ್ 2ರಂದು ಬೆಳಗ್ಗೆ 7.30ರ ಸುಮಾರಿಗೆ ಪಾದಯಾತ್ರೆ ನಡೆಯಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ