ನಾಳೆ ಸಿಂಧಿ ಶಾಲಾ ವಿದ್ಯಾರ್ಥಿಗಳಿಂದ ಅಂಗಾಂಗ-ನೇತ್ರದಾನಕ್ಕಾಗಿ ಜನಜಾಗೃತಿ ಪಾದಯಾತ್ರೆ

ಕಿಡ್ನಿ ಮತ್ತು ನೇತ್ರದಾನ ಕುರಿತಂತೆ ಜನಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸಿಂಧಿ ಹೈಸ್ಕೂಲ್ ಶಾಲೆಯ 2000 ವಿದ್ಯಾರ್ಥಿಗಳು ಪಾದಯಾತ್ರೆ ಕೈಗೊಂಡಿದ್ದಾರೆ...
ಸಿಂಧಿ ಶಾಲೆ
ಸಿಂಧಿ ಶಾಲೆ
ಬೆಂಗಳೂರು: ಅಂಗಾಂಗ ಮತ್ತು ನೇತ್ರದಾನ ಕುರಿತಂತೆ ಜನಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸಿಂಧಿ ಹೈಸ್ಕೂಲ್ ಶಾಲೆಯ 2000 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ. 
ಜನಜಾಗೃತಿ ಪಾದಯಾತ್ರೆಗೆ ಉಪ ಪೊಲೀಸ್ ಜಿಲ್ಲಾಧಿಕಾರಿ ಸಂದೀಪ್ ಪಾಟೀಲ್ ಅವರು ಚಾಲನೆ ನೀಡಲಿದ್ದಾರೆ. ಈ ಪಾದಯಾತ್ರೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದು ಭಾಗವಹಿಸಬೇಕು ಎಂದು ಸಿಂಧಿ ಸೇವಾ ಸಮಿತಿ ಮನವಿ ಮಾಡಿದೆ. 
ಸಿಂಧಿ ಸೇವಾ ಸಮಿತಿಯ ಡೈಮೆಂಡ್ ಜ್ಯೂಬಿಲಿ ಸಂಭ್ರಮಾಚರಣೆ ಹಿನ್ನೆಲೆ ಜೂನ್ 2ರಂದು ಬೆಳಗ್ಗೆ 7.30ರ ಸುಮಾರಿಗೆ ಪಾದಯಾತ್ರೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com