ಆದರೆ, ಇದಕ್ಕೆ ಪ್ರತಿಕ್ರಯಿಸಿರುವ ಲೋಕಾಯುಕ್ತ ರಿಜಿಸ್ಟ್ರಾರ್ ಆರ್ ಎಸ್ ಪಾಟಿಲ್(ಇನ್ ಚಾರ್ಜ್) ಅವರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನ್ಯಾ.ಅಡಿ ಅವರು ಕಚೇರಿಗೆ ಹಾಜರಾಗಬಹುದು. ಅವರ ತಪ್ಪು ಸಾಬೀತಾಗೋವರೆಗೂ ಮತ್ತು ನಂತರ ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಅವರನ್ನು ಪದಚ್ಯುತಿಗೊಳಿಸುವವರೆಗೂ ಅವರು ಕರ್ತವ್ಯ ನಿರ್ವಹಿಸಬಹುದು. ಹಾಗಾಗಿ, ನಾನು ಉಪ ಲೋಕಾಯುಕ್ತರನ್ನು ಕರ್ತವ್ಯ ನಿರ್ವಹಿಸಬೇಡಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಡಿಪಿಎಆರ್ ಗೆ ತಿಳಿಸಿದ್ದಾರೆ.