ಜೆಡಿಎಸ್ ಸದಸ್ಯನ ವರ್ತನೆ ನಿಜಕ್ಕೂ ಖಂಡನೀಯವಾಗಿದ್ದು, ಘಟನೆ ನಂತರ ನಾನು ಕೂಡಲೇ ಜೆಡಿಎಸ್ ಸದಸ್ಯನನ್ನು ಹೊರಹಾಕಲು ಸೂಚಿಸಿದ್ದೆ, ಯಾರೇ ಆಗಲಿ ಇಂಥ ಘಟನೆಗಳನ್ನು ಪ್ರೋತ್ಸಾಹಿಸಬಾರದು. ಹಲ್ಲೆ ನಡೆಸಿದ ಸದಸ್ಯನ ವಿರುದ್ಧ ಜೆಡಿಎಸ್ ಕ್ರಮ ಕೈಗೊಳ್ಳಬೇಕು ಮತ್ತು ಈ ಕೂಡಲೇ ಆತನನ್ನು ಬಂಧಿಸಬೇಕು ಎಂದು ಹಿಟ್ನಾಳ್ ಒತ್ತಾಯಿಸಿದ್ದಾರೆ.