ಚಿನ್ನದ ಅಂಬಾರಿಯನ್ನು ಸರ್ಕಾರದ ವಶಕ್ಕೆ ನೀಡುವಂತೆ ಸುಪ್ರೀಂನಲ್ಲಿ ಮೇಲ್ಮನವಿ

ಮೈಸೂರಿನ ಚಿನ್ನದ ಅಂಬಾರಿ ರಾಜ ಮನೆತನದ ಬಳಿಯಿದ್ದು, ಅದನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯಬೇಕೆಂದು ಇತಿಹಾಸ ತಜ್ಞ ಪ್ರೊಫೆಸರ್‌ ...
ಚಿನ್ನದ ಅಂಬಾರಿ
ಚಿನ್ನದ ಅಂಬಾರಿ
Updated on

ಮೈಸೂರು : ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ರಾಜ ಮನೆತನದ ಬಳಿಯಿದ್ದು, ಅದನ್ನು ಸರ್ಕಾರ ತನ್ನ  ಸುಪರ್ದಿಗೆ ಪಡೆಯಬೇಕೆಂದು ಇತಿಹಾಸ ತಜ್ಞ ಪ್ರೊಫೆಸರ್‌ ಪಿ.ವಿ.ನಂಜರಾಜ ಅರಸ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ರಾಜಮನೆತನದ ವಶದಲ್ಲಿರುವ ಚಿನ್ನದ ಅಂಬಾರಿಯನ್ನು ಸರ್ಕಾರದ ವಶಕ್ಕೆ ನೀಡಬೇಕೆಂದು ನಂಜರಾಜ ಅರಸ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಹಿನ್ನಲೆಯಲ್ಲಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದಾರೆ.

1998 ರ ಕಾಯ್ದೆಯಡಿ ಅಂಬಾರಿಯನ್ನು ಸರ್ಕಾರ ಸುಪರ್ದಿಗೆ ಪಡೆಯಬೇಕು ಮತ್ತು ದಸರಾ ವೇಳೆ ಜಿಲ್ಲಾಡಳಿತ ರಾಜಮನೆತನಕ್ಕೆ ನೀಡುವ ಗೌರವ ಧನ ರದ್ದು ಮಾಡಬೇಕೆಂದು ನಂಜರಾಜ್‌ ಅರಸ್‌ ಅವರು  ಹೈಕೋರ್ಟ್‌ನಲ್ಲಿ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್‌ ಅರ್ಜಿಯನ್ನು ವಜಾ ಗೊಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com