

ಕಲಬುರಗಿ; ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡ 12 ಗಂಟೆಗಳಲ್ಲೇ ಕಲಬುರಗಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ.
ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಹೇಶ್ ರಾವ್ ಗುರುವಾರ ಬೆಳಗ್ಗೆ ಜೈಲಿನಿಂದ ಪರಾರಿಯಾಗಿದ್ದ. ಜೈಲಿನ ತೋಟಗಾರಿಕಾ ಇಲಾಖೆ ಗಾರ್ಡನ್ ನಲ್ಲಿ ಪ್ರತಿದಿನ ಕೆಲಸ ಇರುತ್ತದೆ. ಗುರುವಾರ ಬೆಳಗ್ಗೆ ಕೂಡ 18 ಕೈದಿಗಳು ಕೆಲಸಕ್ಕೆ ತೆರಳಿದ್ದರು ಸಂಜೆ 5.30 ವೇಳೆಗೆ ಉಳಿದ ಎಲ್ಲಾ ಕೈದಿಗಳು ಮುಖ್ಯ ಗೇಟ್ ಬಳಿ ಬಂದಿದ್ದಾರೆ, ಸ್ವಲ್ಪ ಹೊತ್ತು ಹೊರಗೆ ಹೋಗಿ ಬರುವುದಾಗಿ ಹೇಳಿ ಹೋರಟಿದ್ದಾನೆ. ಆದರೆ ಎಷ್ಟೇ ಹೊತ್ತಾದರೂ ವಾಪಸ್ ಬರದಿದ್ದಾಗ ಎಲ್ಲೆಡೆ ಹುಡುಕಿ ಜೈಲಿನ ಸೂಪರಿಂಟೆಂಡ್ ಅವರಿಗೆ ವಿಷಯ ತಿಳಿಸಿದ್ದಾರೆ.
ಸಂಬಂಧ ಕಲಬುರಗಿ ಕೇಂದ್ರ ಕಾರಾಗೃಹದ ಸೂಪರಿಂಡೆಂಟ್ ಸೋಮಶೇಖರ್ ಗುರುವಾರ ರಾತ್ರಿ 10 ಗಂಟೆಗೆ ಫರ್ತಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಕಲಬುರಗಿ ಎಸ್ಪಿ ಶಶಿಕುಮಾರ್ ಹೇಳಿದ್ದಾರೆ.
ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ತೆಲಂಗಾಣದ ನಾರಾಯಣಪೇಟೆಯ ಮೆಹಬೂಬ ನಗರದಲ್ಲಿ ಬಂಧಿಸಿದ್ದಾರೆ. ತೆಲಂಗಾಣ ಮಹೇಶ್ ಸಂಬಂಧಿಯ ಸ್ಥಳವಾಗಿದ್ದು, ಈ ಸುಳಿವಿನ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.