ಹೊಸ ನೋಟು ಪಡೆಯುವ ವೇಳೆ ಬ್ಯಾಂಕ್ ಮುಂದೆ ಯುವಕರಿಬ್ಬರ ಮಾರಾಮಾರಿ

ದೇಶಾದ್ಯಂತ 500-1000 ರುಪಾಯಿ ಮುಖಬೆಲೆಯ ನೋಟು ನಿಷೇಧದ ಹಿನ್ನೆಲೆಯಲ್ಲಿ ಹೊಸ ನೋಟು ಪಡೆಯುಲು ಬ್ಯಾಂಕ್ ಗೆ ಬಂದಿದ್ದ ಗ್ರಾಹಕರಿಬ್ಬರು...
ಯುವಕರು ಮಾರಾಮಾರಿ
ಯುವಕರು ಮಾರಾಮಾರಿ
ಹುಬ್ಬಳ್ಳಿ: ದೇಶಾದ್ಯಂತ 500-1000 ರುಪಾಯಿ ಮುಖಬೆಲೆಯ ನೋಟು ನಿಷೇಧದ ಹಿನ್ನೆಲೆಯಲ್ಲಿ ಹೊಸ ನೋಟು ಪಡೆಯುಲು ಬ್ಯಾಂಕ್ ಗೆ ಬಂದಿದ್ದ ಗ್ರಾಹಕರಿಬ್ಬರು ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 
ಹುಬ್ಬಳಿಯ ದೇಶಪಾಂಡೆನಗರದ ಐಸಿಐಸಿಐ ಬ್ಯಾಂಕ್ ನಲ್ಲಿ ಎಂದಿನಂತ ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಯುವಕನೊಬ್ಬ ಸರತಿ ಸಾಲಿನಿಂದ ಮುಂದೆ ಹೋಗಲು ಯತ್ನಿಸಿದಾಗ ಮತ್ತೊಬ್ಬ ಯುವಕ ಆತನನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಯುವಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಗ್ರಾಹಕರು ಇಬ್ಬರು ಯುವಕರನ್ನು ಸಮಾಧಾನ ಪಡಿಸಲು ಯತ್ನಿಸಿದ ಘಟನೆ ನಡೆದಿದೆ. 
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಮಾರಾಮಾರಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕರಿಬ್ಬರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com