ಆಗ ನೇರವಾಗಿ ಅವರು ಬಂದಿದ್ದು ದಕ್ಷಿಣ ಭಾರತದ ಕೊಡಗು ಜಿಲ್ಲೆಗೆ. ಜೀವ ವೈವಿಧ್ಯಮಯ ಸ್ಥಳ ಕಂಡು ಖುಷಿಯಾದ ದಂಪತಿ ಆರಂಭದಲ್ಲಿ 55 ಎಕರೆ ಜಮೀನನ್ನು 1993ರಲ್ಲಿ ತೆರಾಲು ಗ್ರಾಮದಲ್ಲಿ ಖರೀದಿಸಿದರು. ಕೃಷಿ ಭೂಮಿಯನ್ನು ಅಭಯಾರಣ್ಯವನ್ನಾಗಿ ಪರಿವರ್ತಿಸಿದರು. ಇಂದು ಇವರು ಬೆಳೆಸಿದ ಅರಣ್ಯ ಸಾಂಬಾರ್, ಮುಂಟ್ ಜಾಕ್, ಕಾಡು ಗಂಡು, ಚಿರತೆಗಳು, ಕಾಡು ನಾಯಿಗಳು, ಹುಲಿಗಳು ಮತ್ತು ಆನೆಗಳಿಗೆ ಆಶ್ರಯ ತಾಣವಾಗಿದೆ.