ದಸರಾ: ಅರಮನೆ ಹಾಲ್ ನಲ್ಲಿ ಕಸದ ರಾಶಿ ಕುರಿತು ಯದುವೀರ್ ಅಸಮಾಧಾನ

ಇತ್ತೀಚೆಗಷ್ಟೇ ನಡೆದ ಜಂಬೂ ಸವಾರಿ ಮೆರವಣಿಗೆ ವೇಳೆ ಅರಮನೆಯ ದರ್ಬಾರ್ ಹಾಲ್ ನ ಚಿತ್ರಗಳನ್ನು ಗಮನಿಸಿದರೆ ಸ್ವಚ್ಛ ಭಾರತ ಅಭಿಯಾನದಲ್ಲಿ ಸ್ವಚ್ಛ ನಗರವೆನಿಸಿಕೊಂಡಿದ್ದು ಇದೆ ಮೈಸೂರಾ ಎಂಬ ಪ್ರಶ್ನೆ....
ದಸರಾ: ಅರಮನೆ ಹಾಲ್ ನಲ್ಲಿ ಕಸದ ರಾಶಿ ಕುರಿತು ಯದುವೀರ್ ಅಸಮಾಧಾನ
ದಸರಾ: ಅರಮನೆ ಹಾಲ್ ನಲ್ಲಿ ಕಸದ ರಾಶಿ ಕುರಿತು ಯದುವೀರ್ ಅಸಮಾಧಾನ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದ ಸ್ವಚ್ಛ ಭಾರತ ಅಭಿಯಾನದಲ್ಲಿ ಮೈಸೂರನ್ನು ದೇಶದಲ್ಲೇ ಅತಿ ಸ್ವಚ್ಛ ನಗರ ಎಂದು ಗುರುತಿಸಲಾಗಿತ್ತು. ಆದರೆ ಇತ್ತೀಚೆಗಷ್ಟೇ ನಡೆದ ಜಂಬೂ ಸವಾರಿ ಮೆರವಣಿಗೆ ವೇಳೆ ಅರಮನೆಯ ದರ್ಬಾರ್ ಹಾಲ್ ನ ಚಿತ್ರಗಳನ್ನು ಗಮನಿಸಿದರೆ ಸ್ವಚ್ಛ ಭಾರತ ಅಭಿಯಾನದಲ್ಲಿ ಸ್ವಚ್ಛ ನಗರವೆನಿಸಿಕೊಂಡಿದ್ದು ಇದೆ ಮೈಸೂರಾ ಎಂಬ ಪ್ರಶ್ನೆ ಮೂಡುತ್ತದೆ.

ಹೌದು ಜಂಬೂ ಸವಾರಿ ಮೆರವಣಿ ಮುಕ್ತಾಯಗೊಂಡ ನಂತರ ದರ್ಬಾರ್ ಹಾಲ್ ತುಂಬಾ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಣ್ಣಿಗೆ ರಾಚುತ್ತಿತ್ತು. ಹಾಲ್ ನಲ್ಲಿ ಕುಳಿತು ಜಂಬೂ ಸವಾರಿ ವೀಕ್ಷಿಸಿದ ಗಣ್ಯ ವ್ಯಕ್ತಿಗಳೇ ಈ ಘನಕಾರ್ಯ ಮಾಡಿದ್ದಾರೆ ಎಂಬುದು ಮತ್ತೊಂದು ವಿಶೇಷ. ವಿಶ್ವವಿಖ್ಯಾತ ಮೈಸೂರು ದಸರಾವನ್ನು ವೀಕ್ಷಿಸಲು ಗಣ್ಯರಿಗೆ ಹಾಗೂ ಅವರ ಕುಟುಂಬದವರಿಗೆ ದರ್ಬಾರ್ ಹಾಲ್ ನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಗಣ್ಯ ವ್ಯಕ್ತಿಗಳು ಸ್ವಚ್ಛತೆ ಕಾಪಾಡಿ ಸಮಾಜಕ್ಕೆ ಮಾದರಿಯಾಗುವ ಬದಲು ಕುಳಿತ ಸ್ಥಳದಲ್ಲೇ ಮನಸೋ ಇಚ್ಛೆ ಪ್ಲಾಸ್ಟಿಕ್ ವಸ್ತುಗಳನ್ನು, ಅರ್ಧ ತಿಂದುಬಿಟ್ಟ ಆಹಾರ ಪದಾರ್ಥಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಟ್ಟು ಹೋಗಿದ್ದಾರೆ. ಗಣ್ಯ ವ್ಯಕ್ತಿಗಳ ಈ ಘನಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು ಮೈಸೂರು ರಾಜವಂಶಸ್ಥ  ಯದುವೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com