20 ವರ್ಷಗಳ ವ್ಯಾಜ್ಯ: ಈ ಅಕ್ರಮ ರೆಸಾರ್ಟ್ ನಿರ್ಮಾಣದ ಬಗ್ಗೆ ಮೊದಲಿಗೆ ಮಡಿಕೇರಿ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ನಂತರ ಹೈಕೋರ್ಟ್ ಗೆ ಹೋಗಿ, ಸುಪ್ರೀಂ ಕೋರ್ಟ್ ಗೂ ಹೋಯಿತು. 2002ರಲ್ಲಿ ರೆಸಾರ್ಟ್ ಯೋಜನೆಯನ್ನು ರದ್ದುಗೊಳಿಸಿದಾಗ ತಾವು ಈಗಾಗಲೇ ಕಟ್ಟಡದ ಫೌಂಡೇಶನ್, ಸ್ಥಳದ ಬಾಡಿಗೆ ಇತ್ಯಾದಿಗಳಿಗೆ 3 ಕೋಟಿ ರೂಪಾಯಿ ಖರ್ಚು ಮಾಡಿದ್ದು ಪರಿಹಾರ ನೀಡಬೇಕೆಂದು ಕೋರ್ಟ್ ನಲ್ಲಿ ಕೇಸು ಹಾಕಿತ್ತು.