ಯುವತಿಗೆ ಪ್ರೀತಿಸಬೇಡ ಎಂದಿದ್ದೇ ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆಗೆ ಕಾರಣವಾಯ್ತೆ?

ಯುವತಿಯೊರ್ವಳಿಗೆ ಪ್ರೀತಿಸಬೇಡ ಎಂದು ಹೇಳಿದ್ದೆ ತಂದೆ-ಮಗನ ಮೇಲಿನ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ...
ಯುವತಿ ಕಡೆಯವರಿಂದ ಹಲ್ಲೆಗೊಳಗಾದ ತಂದೆ-ಮಗ
ಯುವತಿ ಕಡೆಯವರಿಂದ ಹಲ್ಲೆಗೊಳಗಾದ ತಂದೆ-ಮಗ
ಮೈಸೂರು: ಯುವತಿಯೊರ್ವಳಿಗೆ ಪ್ರೀತಿಸಬೇಡ ಎಂದು ಹೇಳಿದ್ದೆ ತಂದೆ-ಮಗನ ಮೇಲಿನ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 
ಮೈಸೂರಿನ ಎನ್ ಆರ್ ಮೊಹಲ್ಲಾದ ಮುಕ್ತಾರ್ ಹಾಗೂ ಅವರ ಮಗ ಮೊಹಿನ್ ಅಹಮದ್ ಮೇಲೆ ಭಾನುವಾರ ರಾತ್ರಿ ನಾಲ್ವರು ಅಪರಿಚಿತರು ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. 
ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮೋಹಿನ್ ಪತ್ನಿ ತಮ್ಮ ಸಿರಾಜ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಇದು ಮನೆಯಲ್ಲಿ ಸದಾ ಜಗಳಕ್ಕೆ ಕಾರಣವಾಗಿತ್ತು. ಈಗಾಗಿ ಮೋಹಿನ್ ಆ ಯುವತಿಗೆ ಫೋನ್ ಮಾಡಿ ತನ್ನ ಭಾವಮೈದನನ್ನು ಪ್ರೀತಿಸದಂತೆ ಹೇಳಿದ್ದಾನೆ. 
ಮೋಹಿನ್ ಮಾತಿನಿಂದ ಕೋಪಗೊಂಡ ಯುವತಿ ತನ್ನ ಕಡೆಯವರಿಗೆ ಹೇಳಿ ಹಲ್ಲೆ ಮಾಡಿಸಿದ್ದಾಳೆ ಎಂದು ಮೋಹಿ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಇಲ್ಲಿಯವರೆಗೂ ಯುವತಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. 
ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮೋಹಿನ್ ಪರಿಸ್ಥಿತಿ ಗಂಭೀರವಾಗಿದ್ದು, ತಂದೆ ಮುಕ್ತಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com