ಶ್ರೀರಾಂಪುರದ ನಿವಾಸಿ ಸಂತೋಷ್, ಬನಶಂಕರಿಯ ಖಾಸಗಿ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಆತ ಫೇಸ್ ಬುಕ್ ನಲ್ಲಿ ಕಾವೇರಿ ವಿವಾದ ಮತ್ತು ಕನ್ನಡ ನಟರ ಬಗ್ಗೆ ಜನರನ್ನು ಕೆರಳಿಸುವ ರೀತಿಯಲ್ಲಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದ. ನಿನ್ನೆ ಮಧ್ಯಾಹ್ನ ನಂತರ ಕಾಲೇಜಿಗೆ ಬಂದಿದ್ದ ಸಂತೋಷ್ ನನ್ನು ಸಾರ್ವಜನಿಕರು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.ಆಗ ಸಂತೋಷ್ ಅವರಲ್ಲಿ ಕ್ಷಮೆಯಾಚಿಸಿದನು. ಅಷ್ಟು ಹೊತ್ತಿಗೆ ಅಲ್ಲಿಗೆ ಆಗಮಿಸಿದ ಗಿರಿನಗರ ಠಾಣೆಯ ಪೊಲೀಸರು ಆಗಮಿಸಿದರು. ಆಗ ಸಂತೋಷ್ ಮತ್ತು ಯುವಕರ ಗುಂಪು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.