ಇದೊಂದೇ ಅಲ್ಲದೆ ತಮಿಳು ನಾಡಿನ ಅನೇಕ ಐಟಿ ಕಂಪೆನಿಗಳು, ಅಂಗಡಿಗಳು, ತಮಿಳು ನಾಡಿನ ವಾಹನಗಳು ಇತ್ತೀಚಿನ ಪ್ರತಿಭಟನೆ ವೇಳೆ ಹಾನಿಗೊಂಡಿವೆ ಮತ್ತು ನಾಶವಾಗಿವೆ. ಇವೆಲ್ಲದರ ಮಾಲೀಕರು ಅನೇಕ ವರ್ಷಗಳ ಹಿಂದೆ ತಮಿಳು ನಾಡಿನಿಂದ ಬೆಂಗಳೂರಿಗೆ ಬಂದು ಜೀವನೋಪಾಯ ಕಂಡುಕೊಂಡವರು. ಹಾಗಾಗಿ ಬೇರೆ ದಾರಿಯಿಲ್ಲದೆ ಮತ್ತು ಜೀವನವನ್ನು ಕಟ್ಟುವ ಆಶಾವಾದದಲ್ಲಿ ಇವರಿದ್ದಾರೆ.