ವಲಯ ಪ್ರದೇಶಗಳಲ್ಲಿ ಇರುವ ಅಕ್ರಮ ರೆಸಾರ್ಟ್ ಗಳು, ಹೋಂ ಸ್ಟೇಗಳನ್ನು ಗುರುತಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕಾಳಿ ಮತ್ತು ಭೀಮಗಡದಲ್ಲಿ ಅರಣ್ಯ ಇಲಾಖೆಯಿಂದ ಅಗತ್ಯ ಅನುಮೋದನೆ ಪಡೆಯಲು ರೆಸಾರ್ಟ್ ಮಾಲೀಕರಿಗೆ ನೊಟೀಸು ಕಳುಹಿಸಲಾಗಿದೆ. ಒಂದು ಅಕ್ರಮ ರೆಸಾರ್ಟ್ ನ್ನು ಕೆಡವಿ ಹಾಕಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅನ್ಮೊಡ್ ಟ್ರಿನಿಟಿ ರೆಸಾರ್ಟ್, ದೂದ್ ಸಾಗರ್ ರೆಸಾರ್ಟ್ ಮತ್ತು ಶಂಗ್ರಿಲ್ಲಾ ರೆಸಾರ್ಟ್ ಗೆ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ ಎಂದು ಅರಣ್ಯ ಖಾತೆ ಸಚಿವ ರಮನಾಥ್ ರೈ ತಿಳಿಸಿದ್ದಾರೆ.