ಉತ್ತರ ಕರ್ನಾಟಕದ ಹಲವು ಬರಪೀಡಿತ ತಾಲೂಕುಗಳಲ್ಲಿ ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಸರ್ಕಾರ ಸೂಚಿಸಿದೆ. ಆದರೆ ಬಿಸಿಲ ಬೇಗೆಯಿಂದಾಗಿ ಅದರಲ್ಲೂ ಮಧ್ಯಾಹ್ನದ ವೇಳೆ ಅಧಿಕ ತಾಪಮಾನವಿರುತ್ತದೆ, ಶಾಲೆ ಬಹಳ ದೂರ ಇರುವ ಕಾರಣ ಮಕ್ಕಳು ಹೋಗಿ ಬರಲು ತ್ರಾಸವಾಗುತ್ತದೆ, ಹೀಗಾಗಿ ತಮ್ಮ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬೇಡ ಎಂದು ಪೋಷಕರು ಶಾಲೆ ಸಿಬ್ಬಂದಿಗೆ ತಿಳಿಸಿದ್ದಾರೆ.