ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯವಾಗಿ ಅದರಲ್ಲಿರುವ ನೀರನ್ನೆಲ್ಲಾ ಬತ್ತಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಅಲ್ಲದೆ ಉದ್ಯಾನವನ, ಮಕ್ಕಳ ಆಟದ ಪ್ರದೇಶ, ಫೌಂಟೇನ್, ಮಳೆ ಆಶ್ರಯ ಗೋಪುರ, ಶೌಚಾಲಯ, ಮೂರ್ತಿ ವಿಸರ್ಜನೆ ಟ್ಯಾಂಕ್, ಭದ್ರತಾ ಕೋಣೆ,ಒಳಚರಂಡಿ ನೀರು ಸಂಸ್ಕರಣೆ ಮೊದಲಾದವುಗಳನ್ನು ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಹೊನ್ನಯ್ಯ. ಇದಕ್ಕೆಲ್ಲಾ ಸೇರಿ 81 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಇನ್ನು ಎರಡು ವರ್ಷಗಳಲ್ಲಿ ಪೂರ್ಣವಾಗಲಿದೆ ಎನ್ನುತ್ತಾರೆ ಅವರು.