ಭಟ್ಕಳದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಬ್ಬೀರ್, 9 ವರ್ಷಗಳ ಕಾಲ ನಾನು ಜೈಲು ವಾಸ ಅನುಭವಿಸಿದ್ದೆ. ಪೊಲೀಸರು ನನಗೆ ಕಿರುಕುಳ ನೀಡಿದ್ದರು. 9 ವರ್ಷಗಳ ಕಾಲ ನನಗೆ ನರಕಲ ದರ್ಶನವಾಗಿತ್ತು. ನಾನು ಯಾವುದೇ ಅಪರಾಧವನ್ನು ಮಾಡಿಲ್ಲ. ಆದರೂ ಪೊಲೀಸಲು ಇಲ್ಲಸಲ್ಲದ ಆರೋಪಗಳ ಮೇಲೆ ನನ್ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಕೊನೆಗೂ ನ್ಯಾಯಾಲಯ ನನ್ನನ್ನು ಖುಲಾಸೆಗೊಳಿಸಿ ನ್ಯಾಯ ದೊರಕಿಸಿಕೊಟ್ಟಿದೆ ಎಂದು ಹೇಳಿದ್ದಾನೆ.