ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿನ್ನಪ್ಪ ಎಂಬುವರು ಮಾತನಾಡಿ, ದುಬಾರೆ ಆನೆ ಶಿಬಿರದಲ್ಲಿ ಇಂತಹ ಪ್ರಕರಣ ನಡೆದಿದ್ದು ಇದೇ ಮೊದಲು. ಪ್ರವಾಸಿಗರು ಮತ್ತು ಮಾವುತರ ಮೇಲೆ ಶಿಬಿರದ ಆನೆಗಳು ಇಲ್ಲಿಯವರೆಗೂ ಯಾವುದೇ ರೀತಿಯ ದಾಳಿ ಮಾಡಿರಲಿಲ್ಲ. ಆದರೆ ಮಾವುತ ಅಣ್ಣುವಿನ ಸಾವು ನಿಜಕ್ಕೂ ದುರದುಷ್ಟಕರ ಎಂದು ಹೇಳಿದರು.