ಆನೆ ದಾಳಿ: ದಸರಾ ಆನೆ ದುರ್ಗಾಪರಮೇಶ್ವರಿ ಮಾವುತ ಅಣ್ಣು ಸಾವು

ದುಬಾರೆ ಆನೆ ಶಿಬಿರದಲ್ಲಿದ್ದ ದಸರಾ ಆನೆ ದುರ್ಗಾಪರಮೇಶ್ವರಿ ಮಾವುತ ಅಣ್ಣು ಅವರು ಆನೆ ದಾಳಿಗೆ ಬಲಿಯಾಗಿದ್ದಾರೆ...
ಆನೆ
ಆನೆ
Updated on
ಮಡಿಕೇರಿ: ದುಬಾರೆ ಆನೆ ಶಿಬಿರದಲ್ಲಿದ್ದ ದಸರಾ ಆನೆ ದುರ್ಗಾಪರಮೇಶ್ವರಿ ಮಾವುತ ಅಣ್ಣು ಅವರು ಆನೆ ದಾಳಿಗೆ ಬಲಿಯಾಗಿದ್ದಾರೆ. 
ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ 45 ವರ್ಷದ ಅಣ್ಣು ಅವರು ತಮ್ಮ ಆನೆ ಹುಡುಕಾಟದಲ್ಲಿದ್ದಾಗ ಏಳು ವರ್ಷದ ಆನೆ ಕಾರ್ತಿಕ್ ಅಣ್ಣು ಮೇಲೆ ದಾಳಿ ಮಾಡಿದೆ. ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಣ್ಣು ಮೃತಪಟ್ಟಿದ್ದಾರೆ. ಅಣ್ಣು ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿನ್ನಪ್ಪ ಎಂಬುವರು ಮಾತನಾಡಿ, ದುಬಾರೆ ಆನೆ ಶಿಬಿರದಲ್ಲಿ ಇಂತಹ ಪ್ರಕರಣ ನಡೆದಿದ್ದು ಇದೇ ಮೊದಲು. ಪ್ರವಾಸಿಗರು ಮತ್ತು ಮಾವುತರ ಮೇಲೆ ಶಿಬಿರದ ಆನೆಗಳು ಇಲ್ಲಿಯವರೆಗೂ ಯಾವುದೇ ರೀತಿಯ ದಾಳಿ ಮಾಡಿರಲಿಲ್ಲ. ಆದರೆ ಮಾವುತ ಅಣ್ಣುವಿನ ಸಾವು ನಿಜಕ್ಕೂ ದುರದುಷ್ಟಕರ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com