ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ನಿತ್ಯಾನಂದ, ಸಂತೋಷ್ ಗೆ ಉಸಿರಾಟದ ತೊಂದರೆಯಿತ್ತು. ಇಲ್ಲಿಗೆ ದಾಖಲಿಸುವ ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಮೂರು ತಿಂಗಳ ಚಿಕಿತ್ಸೆ ಪಡೆಯುವಂತೆ ವೈದ್ಯರು ಹೇಳಿದ್ದರು. ಇತ್ತೀಚೆಗೆ ಸಂತೋಷ್ ಮತ್ತೆ ಉಸಿರಾಟದ ತೊಂದರೆಯಿದೆ ಎನ್ನುತ್ತಿದ್ದ. ಸಣ್ಣ ಆಪರೇಶನ್ ಮಾಡಿಸಬೇಕೆಂದು ವೈದ್ಯರು ಹೇಳಿದ್ದರು.