ಮಗುವನ್ನು ಸೀಮೆ ಎಣ್ಣೆ ಸುರಿದು ಹತ್ಯೆ ಮಾಡಿರುವುದರ ಬಗ್ಗೆ ಸ್ವತಃ ತಾಯಿಯೇ ಹೇಳಿಕೆ ನೀಡಿದ್ದು, ಅತಿಮಾನುಷ ಶಕ್ತಿ ಆವಾಹನೆಯಾಗಿದ್ದರಿಂದ ಹೀಗೆ ಮಾಡಿದೆ ಎಂದಿದ್ದಾರೆ. ಚಿಕ್ಕಬಳ್ಳಾಪುರದ ಕೆಸವಾರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಬೋರ್ ವೆಲ್ ಮೆಕ್ಯಾನಿಕ್ ನ ಮಡದಿ ನಿರ್ಮಲ(28) ಮಗುವನ್ನು ಹತ್ಯೆ ಮಾಡಿರುವ ತಾಯಿಯಾಗಿದ್ದು, ಮಗುವನ್ನು ಹತ್ಯೆ ಮಾಡಿರುವುದರ ಬಗ್ಗೆ ತನ್ನ ಪತಿಗೆ ತಿಳಿಸಿದ್ದಾರೆ. ನಂತರ, ಘಟನೆ ನಡೆದಿರುವ ಬಗ್ಗೆ ಬೋರ್ ವೆಲ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್ ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.