ಬೆಂಗಳೂರು: ಕಸಕಡ್ಡಿ, ಗೊಬ್ಬರ, ಕೊಳೆತ ಪದಾರ್ಥಗಳನ್ನು ಯಾರೂ ಹಾಕದಂತೆ ಕೆರೆಯನ್ನು ರಕ್ಷಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಳ್ಳಂದೂರು ಕೆರೆಯ ಸುತ್ತ 12 ಹೋಮ್ ಗಾರ್ಡ್ಸ್ ಗಳನ್ನು ಶಿಫ್ಟ್ ಮಾದರಿಯಲ್ಲಿ ನೇಮಿಸಲಿದೆ. ರಾತ್ರಿ ವೇಳೆ ಗಸ್ತು ವಾಹನ ಕೂಡ ಸಂಚರಿಸಲಿದೆ. ಈ ಎಲ್ಲಾ ಕಾರ್ಯಗಳು ಇಂದಿನಿಂದ ಆರಂಭವಾಗಲಿದೆ.