ಮೈಸೂರು: ಕಳೆದ ಎರಡು ವರ್ಷಗಳಿಂದ ವಾಸಿಸಲು ಮನೆಯಿಲ್ಲದೇ ಮರದ ಮೇಲೆ ವಾಸಿಸುತ್ತಿರುವ ಜೇನು ಕುರುಬ ಸೇರಿದಂತೆ 25 ಮಂದಿ ಬಡುಕಟ್ಟು ಕುಟುಂಬಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನೀಡಲು ಸರ್ಕಾರ ನಿರ್ಧರಿಸಿದೆ.
'ವಿತ್ ನೋ ಶೆಲ್ಟರ್, ದಿಸ್ ಮ್ಯಾನ್ ಲಿವ್ಸ್ ಆನ್ ಎ ಮ್ಯಾಂಗೋ ಟ್ರೀ' ಎಂಬ ಶೀರ್ಷಿಕೆಯಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ವರದಿ ಪ್ರಕಟವಾದ ನಂತರ, ಬುಡಕಟ್ಟು ಅಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿಗಳು ಮಲನಗೆರೆ ಬುಡಕಟ್ಟು ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ನೀಡಿದರು.
ಗಜ್ಜ ಸೇರಿದಂತೆ 26 ಕುಟುಂಬಗಳಿಗೆ ಸರ್ಕಾರ ಬುಡಕಟ್ಟು ಹಕ್ಕುಗಳ ಕಾಯಿದೆ ಅಡಿಯಲ್ಲಿ 28 ಗುಂಟೆ ಭೂಮಿಯನ್ನು ನೀಡಿದೆ. ಇದರಲ್ಲಿ ಮೂರು ಜೇನು ಕುರುಬ ಕುಟುಂಬಗಳು ಗುಡಿಸಲು ನಿರ್ಮಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ಉಪ ಆಯುಕ್ತ ಡಿ. ರಣ್ ದೀಪ್ ಹೇಳಿದ್ದಾರೆ.
ಹೀಗಾಗಿ ಈ ಎಲ್ಲಾ 26 ಕುಟುಂಬಗಳಿಗೂ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಶೀಘ್ರವೇ ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದ್ದಾರೆ.
ತನಗೆ ಗುಡಿಸಲು ನಿರ್ಮಿಸಿಕೊಳ್ಳುವಷ್ಟು ಆರ್ಥಿಕ ಚೈತನ್ಯವಿಲ್ಲ ಎಂದು ಗಜ್ಜಾ ಹೇಳಿದ ಹಿನ್ನೆಲೆಯಲ್ಲಿ ಆತನಿಗೆ ಧನಸಹಾಯ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಅರಣ್ಯ ಇಲಾಖೆ ನೀಡಿರುವ ಭೂಮಿಯಲ್ಲಿ ಗಜ್ಜನ ಸಹೋದರರು ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಸರ್ಕಾರ ಧನ ಸಹಾಯ ನೀಡಲಿದೆ.