ನಟ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್‌ಗೆ ಚೂರಿ ಇರಿದ ದುಷ್ಕರ್ಮಿಗಳು

ಸ್ಯಾಂಡಲ್ವುಡ್ ನಟ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್‌ಗೆ ದುಷ್ಕರ್ಮಿಗಳು ಚೂರಿ ಇರಿದಿದ್ದಾರೆ...
ಗುರುರಾಜ್
ಗುರುರಾಜ್
ಬೆಂಗಳೂರು: ಸ್ಯಾಂಡಲ್ವುಡ್ ನಟ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್‌ಗೆ ದುಷ್ಕರ್ಮಿಗಳು ಚೂರಿ ಇರಿದಿದ್ದಾರೆ. 
ಆರ್ ಟಿ ನಗರದಲ್ಲಿ ಗುರುರಾಜ್‌ಗೆ ತಮ್ಮ ಮಗನನ್ನು ಶಾಲೆಗೆ ಬಿಡಲು ಕರೆದೊಯ್ಯುವಾಗ ಕೆಲ ದುಷ್ಕರ್ಮಿಗಳು ಗುರುರಾಜ್‌ಗೆ ಕಾಲಿನ ತೊಡೆಗೆ ಚಾಕು ಇರಿದು ಪರಾರಿಯಾಗಿದ್ದಾರೆ. ಸದ್ಯ ಗುರುರಾಜ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 
ಮಗನನ್ನು ಶಾಲೆಗೆ ಬಿಡಲು ಹೊರಟ್ಟಿದ್ದಾಗ ಗುರುರಾಜ್ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಆಗ ಕಾರಿನ ಡ್ರೈವರ್ ರನ್ನು ಗುರುರಾಜ್ ಪ್ರಶ್ನಿಸಿದ್ದು ಇದಕ್ಕೆ ಆಕ್ರೋಶಗೊಂಡ ಚಾಲಕ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. 
ಕಾರಿನ ಚಾಲಕನನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಕಾರಿನ ಮಾಹಿತಿಯನ್ನು ಕಲೆಹಾಕಿದ್ದಾರೆ. ಕೃಷ್ಣೆಗೌಡ ಎಂಬುವರಿಗೆ ಸೇರಿದ್ದು ಆತ ಹೆಬ್ಬಾಳದಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ಪೊಲೀಸರಿಗೆ ದೂರು ನೀಡದ ಗುರುರಾಜ್ ಹಲ್ಲೆ ನಡೆಸಿದ ವ್ಯಕ್ತಿಗೂ ನನಗೂ ಯಾವುದೇ ರೀತಿಯ ವೈರತ್ವವಿಲ್ಲ ಎಂದು ಹೇಳಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com