ವಿ.ಎಸ್.ಪ್ರಕಾಶ್ ಹಲವು ಬಾರಿ ಜೈಲಿನೊಳಗೆ ಹೋಗುತ್ತಾರೆ. ಕೆಲವು ಸಲ ಒಳಗೆ ಹೋದ ಬಗ್ಗೆ ದಾಖಲೆಯಲ್ಲಿ ಹೆಸರು ನಮೂದಿಸಿದ್ದರೆ ಇನ್ನು ಹಲವು ಬಾರಿ ದಾಖಲು ಮಾಡಿರುವುದೇ ಇಲ್ಲ. ಅವರಿಗೆ ಜೈಲಿನೊಳಗೆ ಪ್ರವೇಶಿಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಜರಾಜ್ ಮಕನೂರ್ ಸಹಾಯ ಮಾಡುತ್ತಾರೆ. ಇದನ್ನು ಗೇಟ್ ಸಂಖ್ಯೆ 1 ಮತ್ತು ಗೇಟ್ ಸಂಖ್ಯೆ 2ರಲ್ಲಿ ಸಿಸಿಟಿವಿ ಕ್ಯಾಮರಾ ಸಂಖ್ಯೆ 8ರಲ್ಲಿ ದಾಖಲಾಗಿರುವುದನ್ನು ಪರಿಶೀಲಿಸಬಹುದು. ಜೈಲಿನ ಮುಖ್ಯಸ್ಥ ಕೃಷ್ಣ ಕುಮಾರ್, ಜೈಲಿನ ಡಿಜಿ ಸತ್ಯನಾರಾಯಣ್ ರಾವ್ ಅವರ ಪರವಾಗಿ ವ್ಯವಹಾರ ಕುದುರಿಸಿ ಮಲ್ಲಿಕಾರ್ಜುನ್ ಮತ್ತು ಟಿಟಿವಿ ದಿನಕರನ್ ಬಳಿಯಿಂದ 2 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ರೂಪಾ ಸಲ್ಲಿಸಿದ ವರದಿಯಲ್ಲಿ ವಿವರಿಸಲಾಗಿದೆ.