ಆಗ ಇದರ ವಿರುದ್ದ ಸೋಮಶೇಖರ್ ಸಹ ಪ್ರತಿ ಹೇಳಿಕೆ ನೀಡಿದ್ದರು. ಇದರಿಂದ ಬೇಸರಗೊಂಡ ಚಿಕ್ಕಣ್ಣ ಅವರು ಸೋಮಶೇಖರ್ ವಿರುದ್ಧ ಮೈಸೂರಿನ ಜೆಎಂಎಫ್ಸಿ 3ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆಗೆ ಹಲವು ಬಾರಿ ಸೋಮಶೇಖರ್ ಗೈರಾಗಿದ್ದರು.ಇದೀಗ ಮೊನ್ನೆ ಡಿ. 4ರಂದು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುವುದಿದ್ದು ಶಾಸಕರ ಹಾಜರಾತಿ ಅನಿವಾರ್ಯವಾಗಿತ್ತು.ಆದರೆ ಅಂದು ಸಹ ಅವರು ಹಾಜರಾಗದೆ ಇದ್ದ ಕಾರಣ ನ್ಯಾಯಾಲಯವು ಶಾಸಕರನ್ನು ಬಂಧಿಸುವಂತೆ ಜಾಮೀನ ರಹಿತ ವಾರಂಟ್ ಜಾರಿ ಮಾಡಿದೆ