ಮಗುವಿನ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು, ಆನ್ ಲೈನ್ ಮೂಲಕ ನಾಗರಿಕರಿಗೆ ಮನವಿ ಮಾಡಲಾಯಿತು. ಅಂತಿಮವಾಗಿ ಮಗು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಅವಳನ್ನು ರಾಜ್ಯದ ಶಿಶು ನಿವಾಸಕ್ಕೆ ಕರೆತರಲಾಯಿತು. ಇದೀಗ ಮಗುವು ರಾಜ್ಯ ಸರ್ಕಾರದ ಶಿಶು ನಿವಾಸದಲ್ಲಿದೆ. "ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಇಷ್ಟಪಡುತ್ತೇನೆ, ಆದರೆ ನನಗೆ ಈಗಾಗಲೇ ಮಕ್ಕಳು ಇದ್ದಾರೆ,ಹೀಗಾಗಿ ನನಗೆ ಈ ಮಗುವನ್ನು ದತ್ತು ತೆಗೆದುಕೊಳ್ಳಲು ಆಗುವುದಿಲ್ಲ. ಆದರೆ ದತ್ತು ಸ್ವೀಕಾರ ಮಾಡಲು ಬಯಸುವ ಜನರಿಂದ ನಾನು ಸುಮಾರು 70 ಕರೆಗಳನ್ನು ಸ್ವೀಕರಿಸಿದ್ದೇನೆ. " ಶಶಿಧರ್ ಹೇಳಿದ್ದಾರೆ. ಇನು ಕೆಲ ದಿನಗಳಲ್ಲಿಯೇ ಶಿಶುವು ಔಪಚಾರಿಕವಾಗಿ ದತ್ತು ಸ್ವೀಕರಿಸಲ್ಪಟ್ಟು ಪೋಷಕರ ಮಡಿಲು ಸೇರಲಿದೆ ಎಂದು ಅವರು ಭರವಸೆಯಿಂದ ನುಡಿದರು.