ಹೊನ್ನಾವರ ಬಳಿ ಬಸ್ ಅಪಘಾತ: ಇಬ್ಬರು ಸಾವು, 10 ಮಂದಿಗೆ ಗಾಯ

ಹೊನ್ನಾವರ ತಾಲ್ಲೂಕಿನ ಯಲಗುಪ್ಪ ಗ್ರಾಮದ ಬಳಿ ಹೊನ್ನಾವರದಿಂದ ಬೆಂಗಳೂರಿಗೆ ತೆರಳುತ್ತಿದ್ದ ....
ಹೊನ್ನಾವರ ಬಳಿ ಮಗುಚಿಬಿದ್ದ ಬಸ್
ಹೊನ್ನಾವರ ಬಳಿ ಮಗುಚಿಬಿದ್ದ ಬಸ್
Updated on
ಕಾರವಾರ: ಹೊನ್ನಾವರ ತಾಲ್ಲೂಕಿನ ಯಲಗುಪ್ಪ ಗ್ರಾಮದ ಬಳಿ ಹೊನ್ನಾವರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ಸು ಮಗುಚಿ ಬಿದ್ದು ಇಬ್ಬರು ಪ್ರಯಾಣಿಕರು ಮೃತಪಟ್ಟು ಇತರ 10 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಮೃತಪಟ್ಟವರನ್ನು 19 ವರ್ಷದ ಪ್ರೀತಂ ಮತ್ತು 20 ವರ್ಷದ ಸಂಗೀತ ಎಂದು ಗುರುತಿಸಲಾಗಿದ್ದು ಇವರು ಹುಬ್ಬಳ್ಳಿ ಮತ್ತು ಮೈಸೂರು ಮೂಲದವರಾಗಿದ್ದಾರೆ. 
ಗಾಯಗೊಂಡವರು ಹೊನ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾಯವ್ಯ ಸಂಚಾರ ಸಾರಿಗೆ ಕಾರವಾರದಿಂದ ಚಿಕ್ಕಮಗಳೂರಿಗೆ ಸಾಗುತ್ತಿದ್ದು ಸುಮಾರು 35 ಮಂದಿ ಪ್ರಯಾಣಿಕರು ಬಸ್ಸಿನಲ್ಲಿದ್ದರು. ಎದುರುಗಡೆಯಿಂದ ಕಿರು ರಸ್ತೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಬಂದಾಗ ಬಸ್ ಚಾಲಕ ಬ್ರೇಕ್ ಹಾಕಿದರು. ಆಗ ಬಸ್ಸು ರಸ್ತೆಯ ಪಕ್ಕಕ್ಕೆ ಮಗುಚಿ ಬಿದ್ದಿತು. ಪೊಲೀಸರು ಕೇಸು ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com