ಇದೊಂದೇ ಅಲ್ಲದೆ, ಸಚಿವ ಹೆಗ್ಡೆಯವರ ವಿರುದ್ಧ ಸಾಕಷ್ಟು ವಿವಾದಗಳಿವೆ. ಹಲವು ಬಾರಿ ಪ್ರಚೋದನಾತ್ಮಕ ಹೇಳಿಕೆಗಳನ್ನೂ ನೀಡಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. 2016ರ ಮಾರ್ಚ್ ತಿಂಗಳಿನಲ್ಲಿ ಇಸ್ಲಾಂ ಇರುವವರೆಗೂ ವಿಶ್ವದಲ್ಲಿ ಭಯೋತ್ಪಾದನೆ ಎಂಬ ಪಿಡುಗು ತೊಲಗುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಅಪ್ಪ,ಅಮ್ಮಂದಿರ ರಕ್ತದ ಪರಿಚಯ ಇಲ್ಲದವರು 'ಜಾತ್ಯಾತೀತರು' ಎಂಬ ಹೇಳಿಕೆಯನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ.