ನಾಡಗೀತೆ ಹಾಡುವಾಗ ಪ್ರೊಬೆಷನರಿ ಐಎಎಸ್ ಅಧಿಕಾರಿಯಿಂದ ಅಗೌರವ

ಶಿರಾ ತಾಲೂಕಿನಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಕುವೆಂಪು ಅವರ ....
ಪ್ರೀತಿ ಗೆಹ್ಲೊಟ್
ಪ್ರೀತಿ ಗೆಹ್ಲೊಟ್
Updated on
ತುಮಕೂರು: ಶಿರಾ ತಾಲೂಕಿನಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಕುವೆಂಪು ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕುವೆಂಪುರವರ ನಾಡಗೀತೆ ಹಾಡುತ್ತಿದ್ದಾಗ ಪರೀಕ್ಷಣಾಧಿಕಾರಿ(ಪ್ರೊಬೆಷನರ್) ಐಎಎಸ್ ಅಧಿಕಾರಿ ಚೂಯಿಂಗ್ ಗಮ್ ಜಗಿಯುತ್ತಿದ್ದ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿ ಭಾರೀ ಸುದ್ದಿಯಾಗಿದೆ.
ನಿನ್ನೆ ವೇದಿಕೆ ಮೇಲೆ ಕಲಾವಿದರು ನಾಡಗೀತೆ ಹಾಡಲು ಆರಂಭಿಸಿದಾಗ 2015ನೇ ಸಾಲಿನ ಪ್ರೊಬೆಷನರ್ ಅಧಿಕಾರಿ ಪ್ರೀತಿ ಗೆಲ್ಹೊಟ್ ಎದ್ದು ನಿಂತರು. ಆದರೆ ಬಾಯಲ್ಲಿ ಚೂಯಿಂಗ್ ಗಮ್ ಜಗಿಯುತ್ತಿದ್ದರು. 
ಇದು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಾರ್ವಜನಿಕರಿಂದ ಅಧಿಕಾರಿ ವಿರುದ್ಧ ಟೀಕೆಗಳು ಕೇಳಿಬಂದವು. ಸಾಮಾಜಿಕ ಮಾಧ್ಯಮದಲ್ಲಿ ಇದು ವೈರಲ್ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com