ವಿಕಾಸ್ ಕುಮಾರ್ ಗೌತಮ್ ಮೊನ್ನೆ ಸಾಯಂಕಾಲ 7.30ರ ಸುಮಾರಿಗೆ ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಕಾರಿನಲ್ಲಿ ಪೆಟ್ರೋಲ್ ಮುಗಿದಿದ್ದರಿಂದ ಮಾರುತಿ ಓಮ್ನಿ ಕಾರನ್ನು ನಿಲ್ಲಿಸಲಾಗಿತ್ತು. ಆದರೆ ಸಿಗ್ನಲ್ ಲೈಟನ್ನು ಚಾಲಕ ಹಾಕಿರಲಿಲ್ಲ. ಬೈಕ್ ನಲ್ಲಿ ಬರುತ್ತಿದ್ದ ವಿಕಾಸ್ ಗೌತಮ್ ಗೆ ಕಾರು ನಿಂತಿರುವುದು ರಾತ್ರಿ ವೇಳೆ ಗೊತ್ತಾಗಲಿಲ್ಲ. ಬೈಕ್ ಕಾರಿಗೆ ಗುದ್ದಿತು. ಕಾರಿಗೆ ಗುದ್ದಿದ ರಭಸಕ್ಕೆ ವಿಕಾಸ್ ಮಾರ್ಗ ಮಧ್ಯೆ ಕೆಳಗೆ ಬಿದ್ದರು. ಆಗ ಹಿಂದಿನಿಂದ ವೇಗವಾಗಿ ಬಂದ ಕಾರು ಅವರ ಮೇಲೆ ಹರಿಯಿತು. ತೀವ್ರ ಗಾಯಗೊಂಡ ವಿಕಾಸ್ ನನ್ನು ದಾರಿಹೋಕರು ಆಸ್ಪತ್ರೆಗೆ ತೆಗೆದುಕೊಂಡು ಹೋದರಾದರೂ ಅವರು ಬದುಕುಳಿಯಲಿಲ್ಲ.