ತುಮಕೂರು: ಮೂಹೂರ್ತಕ್ಕೆ ಸಿದ್ದವಾಗುತ್ತಿದ್ದ ಮಧುಮಗ ಕಲ್ಯಾಣ ಮಂಟಪದಲ್ಲಿ ಸಾವು

ಮೂಹೂರ್ಥಕ್ಕೆ ಕೆಲವೇ ಸಮಯ ಬಾಕಿಯಿತ್ತು, ವಧುವಿಗೆ ತಾಳಿ ಕಟ್ಟಲು ವರ ಸಿದ್ಧತೆ ನಡೆಸಿಕೊಳ್ಳುತ್ತಿದ್ದ. ಈ ವೇಳೆಗಾಗಿಯೇ ಹೊಂಚು ಹಾಕಿ ಕುಳಿತಿದ್ದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತುಮಕೂರು: ಮೂಹೂರ್ಥಕ್ಕೆ ಕೆಲವೇ ಸಮಯ ಬಾಕಿಯಿತ್ತು ,ವಧುವಿಗೆ ತಾಳಿ ಕಟ್ಟಲು ವರ ಸಿದ್ಧತೆ ನಡೆಸಿಕೊಳ್ಳುತ್ತಿದ್ದ. ಈ ವೇಳೆಗಾಗಿಯೇ ಹೊಂಚು ಹಾಕಿ ಕುಳಿತಿದ್ದ ಜವರಾಯ ವರನ ಪ್ರಾಣಪಕ್ಷಿಯನ್ನ ಹೊತ್ತೊಯ್ದಿದ್ದಾನೆ.

ಹೊಸಬಾಳಿನ ಹೊಸ್ತಿಲು ತುಳಿಯಲು ರೆಡಿಯಾಗುತ್ತಿದ್ದ ವರನಿಗೆ ಹೃದಯಾಘಾತವಾಗಿ ಕಲ್ಯಾಣ ಮಂಟಪದಲ್ಲೇ ಸಾವನ್ನಪ್ಪಿರುವ ಘಟನೆ  ತುಮಕೂರಿನಲ್ಲಿ ನಡೆದಿದೆ. ವಸಂತ್ ಕುಮಾರ್ ಮೃತ ದುರ್ದೈವಿ.

ತುಮಕೂರಿನ ಗವಿರಂಗ ಕಲ್ಯಾಣ ಮಂಟಪದಲ್ಲಿ ದುರಂತ ನಡೆದಿದೆ. ವಸಂತ್‌ಕುಮಾರ್‌ ಎಂ.ಟೆಕ್‌ ಪದವೀಧರರಾಗಿ ಉನ್ನತ ಹುದ್ದೆಯಲ್ಲಿದ್ದು, ಎಂ.ಟೆಕ್‌ ಪದವೀಧರೆಯೊಂದಿಗೆ ವಿವಾಹ ನೆರವೇರಬೇಕಿತ್ತು. ಶನಿವಾರ ಸಂಜೆ  ಆರತಕ್ಷತೆ ಸೇರಿದಂತೆ, ವರಪೂಜೆ ಸಂಪ್ರದಾಯಗಳು ನೆರವೇರಿದ್ದವು. ವರನ ಸಾವಿನಿಂದ ಕಲ್ಯಾಣ ಮಂಟಪದಲ್ಲಿ ಸ್ಮಶಾನ ಮೌನ ಆವರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com