ಕಪ್ಪತಗುಡ್ಡ ಸಂರಕ್ಷಿತ ಅರಣ್ಯ ಎಂದು ಘೋಷಿಸುವುದು ಬೇಡ: ಸಿಎಂ ಗೆ ರೈತರ ಮನವಿ

ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯವಾಗಿ ಘೋಷಿಸುವುದು ಬೇಡ ಎಂದು ಕಪ್ಪತಗುಡ್ಡ ರೈತರ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯವಾಗಿ ಘೋಷಿಸುವುದು ಬೇಡ ಎಂದು ಕಪ್ಪತಗುಡ್ಡ ರೈತರ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.

ಕಪ್ಪತಗುಡ್ಡ ರೈತ ಮತ್ತು ರೈತ ಕಾರ್ಮಿಕರ ರಕ್ಷಣಾ ವೇದಿಕೆ ಸದಸ್ಯರು ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಪ್ರದೇಶದಲ್ಲಿ 639 ರೈತ ಕುಟುಂಬದವರು ಕೃಷಿ ಮಾಡುತ್ತಿದ್ದಾರೆ. 90 ಸಾವಿರ ಜಾನುವಾರುಗಳ ಪೈಕಿ, 40 ಸಾವಿರ ಕುರಿ ಮೇಕೆ, ಹೊರ ಜಿಲ್ಲೆಯಿಂದ ಬರುವ 50 ಸಾವಿರ ಕುರಿ ಮೇಕೆಗಳು ಆಹಾರಕ್ಕಾಗಿ ಎಲ್ಲ ಋತುಮಾನಗಳಲ್ಲಿ  ಈ ಪ್ರದೇಶದ ಹುಲ್ಲನ್ನೆ ಅವಲಂಬಿಸಿವೆ. ಈ ವ್ಯಾಪ್ತಿಯ 324 ಹೆಕ್ಟೇರ್‌ ಪ್ರದೇಶದಲ್ಲಿ ಸರ್ಕಾರ ಮತ್ತು ಖಾಸಗಿ ಬಹುರಾಷ್ಟ್ರೀಯ ಕಂಪೆನಿಗಳು ಪವನ ವಿದ್ಯುತ್‌ ಯಂತ್ರ ಅಳವಡಿಸಿ, ವಿದ್ಯುತ್‌ ಉತ್ಪಾದನೆ ಮಾಡುತ್ತಿವೆ. ಸಂರಕ್ಷಿತ ಅರಣ್ಯ ಎಂದು ಘೋಷಿಸಿದರೆ ಪವನ ವಿದ್ಯುತ್‌ ಯಂತ್ರಗಳನ್ನು ತೆರವುಗಳಿಸಬೇಕಾಗುತ್ತದೆ. ಇದರಿಂದ ವಿದ್ಯುತ್‌ ಕ್ಷಾಮ ಉಂಟಾಗಲಿದೆ ಎಂದು ಮನವಿ ಹೇಳಿದೆ.

ರೈತರು, ಕೃಷಿ ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ಮೀಸಲು ಪ್ರದೇಶ ಎಂದು ಘೋಷಿಸಬಾರದು. ಅದರ ಬದಲು ಕಪ್ಪತಗುಡ್ಡ ವ್ಯಾಪ್ತಿಯ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿ ರುವ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಇನ್ನೂ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಫೆಬ್ರವರಿ 20 ರಂದು ರಾಜ್ಯ ವನ್ಯಜೀವಿ ಮಂಡಳಿಯ ಸಭೆ ನಡೆಸಲಿದ್ದಾರೆ, ಅಂದು ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. 18 ಸಾವಿರ ಎಕರೆ ಕಪ್ಪತಗುಡ್ಡ ಪ್ರದೇಶವನ್ನು ಸಂರಕ್ಷಿತ ಅರಣ್ಯ ಎಂದು ಘೋಷಿಸುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com