ಇತ್ತೀಚೆಗೆ ಶಾಲೆಯ ಬಸ್ಸೊಂದಕ್ಕೆ ಬೆಂಕಿ ಹತ್ತಿಕೊಂಡಿದ್ದು, ಅಲ್ಲಿ ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಲಾಗಿತ್ತು. ಈ ನಿಟ್ಟಿನಲ್ಲಿ ನಿಯಮ ಬಿಗಿಗೊಳಿಸಿರುವ ಸಿಬಿಎಸ್ಇ ಮಂಡಳಿ, ಮಕ್ಕಳ ಸಾರಿಗೆ ವಿಚಾರದಲ್ಲಿ ಕೆಲವೊಂದು ಶಾಲೆಗಳು ಅಸಡ್ಡೆಯ ಧೋರಣೆ ತಳೆಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಕಠಿಣ ನಿಲುವು ತಳೆಯಲು ಮುಂದಾಗಿದ್ದೇವೆ ಎಂದು ಮಂಡಳಿ ತಿಳಿಸಿದೆ.