ರಾಯಚೂರು ಎಂದಾಕ್ಷಣ ನೆನಪಿಗೆ ಬರುವುದು ಬಿಸಿಲು ಹೆಚ್ಚು, ನೀರಿಗೆ ಕೊರತೆ. ಇಲ್ಲಿ ಅನೇಕ ಕೊಳಗಳಿವೆ, ಇಲ್ಲಿನ ರೈತರು ಪರ್ಯಾಯ ಆದಾಯವಾಗಿ ಮೀನು ಮತ್ತು ಸಿಗಡಿಗಳನ್ನು ಸಾಕುತ್ತಾರೆ. ಆದರೆ ಈ ಮೀನು, ಸಿಗಡಿಗಳ ಮೇಲೆ ರೈತರು ಬೆಳೆಗಳಿಗೆ ಸಿಂಪಡಣೆ ಮಾಡುವ ರಾಸಾಯನಿಕಗಳು ಮಳೆ ಬಂದಾಗ ತೊಳೆದು ಹೋಗಿ ಕೊಳಗಳನ್ನು ಸೇರುತ್ತವೆ. ಅಲ್ಲದೆ ಸಾಕಷ್ಟು ರಾಸಾಯನಿಕಗಳು ಅಂತರ್ಜಲವನ್ನು ಸೇರುತ್ತವೆ.