ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವೆ: ಬೆಳಗಾವಿ ಶಾಸಕ ಪಿ. ರಾಜೀವ್ ವಿಡಿಯೋ ವೈರಲ್

ಸರ್ಕಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದ ಕುಡಚಿ ಶಾಸಕ ಪಿ.ರಾಜೀವ ಈಗ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಅಮಾಯಕರಿಂದ ಹಣ ವಸೂಲಿಗೆ ...
ಪಿ.ರಾಜೀವ್
ಪಿ.ರಾಜೀವ್
ಬೆಳಗಾವಿ: ಸರ್ಕಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದ ಕುಡಚಿ ಶಾಸಕ ಪಿ.ರಾಜೀವ ಈಗ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಅಮಾಯಕರಿಂದ ಹಣ ವಸೂಲಿಗೆ ಮುಂದಾದರೆ ಅಂತಹ ಪೊಲೀಸ್‌ ಠಾಣೆಗಳಿಗೆ ಬೆಂಕಿ ಹಚ್ಚುವೆ ಎಂದು ಹೇಳುವ ಮೂಲಕ ಹೊಸ ರಗಳೆಗೆ ನಾಂದಿ ಹಾಡಿದ್ದಾರೆ. 
ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ನಮ್ಮ ಬೆಂಬಲಿಗ ನಿಡಗುಂದಿ ಗ್ರಾಮದ ಬಸಪ್ಪ ಭಜಂತ್ರಿ ಅವರನ್ನು ಫಿಕ್ಸ್‌ ಮಾಡಲು  ರಾಯಭಾಗ ಪೊಲೀಸರು ಯತ್ನಿಸುತ್ತಿದ್ದಾರೆ. ಇದರಿಂದ ಹೆದರಿರುವ ಬಸಪ್ಪ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ. ತಪ್ಪು ಮಾಡಿಲ್ಲವೆಂದರೆ ಯಾಕೆ ಹೆದರುತ್ತಿ ಎಂದು ಕರೆಸಿಕೊಂಡಿದ್ದೇನೆ. ಕೇಸ್‌ನಿಂದ ಕೈಬಿಡಲು 1 ಲಕ್ಷ ರು ಕೊಡುವಂತೆ ಬಸಪ್ಪನಿಗೆ ರಾಯಬಾಗ ಇನ್‌ಸ್ಪೆಕ್ಟರ್ ಪೀಡಿಸಿದ್ದಾರೆ.  ಪೊಲೀಸ್‌ ಠಾಣೆಗಳು ಜನರನ್ನು ಪೀಡಿಸುವ ಕೇಂದ್ರಗಳಾಗುತ್ತಿವೆ. ಇದೇ ರೀತಿ ಮುಂದುವರಿದರೆ ಪೊಲೀಸ್ ಠಾಣೆಗೆ ಬೆಂಕಿ ಹಾಕುತ್ತೇನೆ’ ಎಂದು ಸಾರ್ವಜನಿಕವಾಗಿ ಆಕ್ರೋಶದಿಂದ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಮಹಿಳೆಯ ಆತ್ಮಹತ್ಯೆಗೆ ಕಾರಣ ಎಂದು ಹೇಳುತ್ತಿರುವ ವ್ಯಕ್ತಿ ಆಕೆ ನೇಣಿಗೆ ಶರಣಾದ ದಿನ ನಗರದಲ್ಲಿಯೇ ಇರಲಿಲ್ಲ, ಪೊಲೀಸರು ವಿನಾಕಾರಣ ಆತನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ರಾಜೀವ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com