ಬೆಂಗಳೂರು: ಇಲ್ಲಿನ ಪ್ರಖ್ಯಾತ ಗವಿ ಗಂಗಾಧರೇಶ್ವರ ದೇವಾಲಯದ ಬಲಭಾಗ ಕಿಂಡಿಯಿಂದ ಸೂರ್ಯರಶ್ಮಿ ಪ್ರವೇಶಿಸಿ ಶಿವಲಿಂಗದ ಪಾದವನ್ನು ಸ್ಪರ್ಶಿಸಿತು. ಇಂದು ಸಂಜೆ 5.19ಕ್ಕೆ ಸೂರ್ಯರಶ್ಮಿ ನಂದಿಯ ಕೊಂಬಿನ ಸುತ್ತ ಹರಿದು ಶಿವಲಿಂಗದ ಪಾದವನ್ನು ಸ್ಪರ್ಶಿಸಿದೆ. ಶಿವಲಿಂಗಕ್ಕೆ ಹೆಚ್ಚಿನ ಶಾಖ ಉಂಟಾಗಬಾರದೆಂದು ಅರ್ಚಕರು ಹಾಲಿನ ಅಭಿಷೇಕ ನೆರವೇರಿಸಿದರು. ಈ ವಿಸ್ಮಯಕಾರಿ ಘಳಿಗೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.