ಈ ರೋಟಿ ಘರ್ ಆರಂಭವಾಗಿದ್ದು ಆರು ವರ್ಷಗಳ ಹಿಂದೆ. ಮಹವೀರ್ ಯುವ ಸಂಘಟನೆ ಇದನ್ನು ಸಮಾಜದಲ್ಲಿ ಏಕತೆಯ ಭಾವವನ್ನು ಮೂಡಿಸಲು, ಬಡತನವನ್ನು ಹೋಗಲಾಡಿಸಲು ಆರಂಭಿಸಲಾಯಿತು. ಕಲ್ಲಪ್ಪ ಮರೆಗುಂಪಿ ಎಂಬ ತರಕಾರಿ ಮಾರಾಟಗಾರ ಹೇಳುವ ಪ್ರಕಾರ, 2012ರಿಂದ ನಾನಿಲ್ಲಿ ಊಟ ಮಾಡುತ್ತಿದ್ದೇನೆ. ನಮ್ಮ ಮನೆಯಲ್ಲಿನ ಊಟದ ರುಚಿಯೇ ಇಲ್ಲಿನ ಊಟಕ್ಕೂ ಇರುತ್ತದೆ. ಹಬ್ಬಗಳ ಸಂದರ್ಭದಲ್ಲಿ ಹೋಳಿಗೆ, ಜಿಲೇಬಿ, ಕರ್ಜಿಕಾಯಿ ಮೊದಲಾದ ಸ್ವೀಟ್ ಕೊಡುತ್ತಾರೆ. ಒಂದು ರೂಪಾಯಿಗೆ ಊಟ ಸಿಗುತ್ತಿರುವುದರಿಂದ ಸುತ್ತಮುತ್ತಲ ಬಡ ಬಗ್ಗರಿಗೆ ಎಷ್ಟೋ ಪ್ರಯೋಜನವಾಗಿದೆ ಎನ್ನುತ್ತಾರೆ.